CHITRADURGA NEWS | 16 JULY 2024
ಚಿತ್ರದುರ್ಗ: ಕಳೆದ ಒಂದು ವಾರದಿಂದ ಜಿನಿ ಜಿನಿ ಸುರಿಯುತ್ತಿದ್ದ ಮಳೆ ಚಿತ್ರದುರ್ಗದಲ್ಲಿ ಇಂದು ತುಸು ಬಿರುಸು ಪಡೆದುಕೊಂಡಿತ್ತು.
ಈಗಾಗಲೇ ಮೆಕ್ಕೆಜೋಳ, ಶೇಂಗಾ ಬಿತ್ತನೆ ಮಾಡಿದ್ದ ರೈತರಿಗೆ ಸೋನೆ ಮಳೆಯಾದರೂ ಬೆಳೆಗೆ ಹಿತವಾಗಿತ್ತು. ಆದರೆ, ಬಿತ್ತನೆ ಮಾಡಲು ಭೂಮಿ ಹದ ಮಾಡಿಕೊಂಡಿದ್ದ ರೈತರಿಗೆ ಜಿಟಿಜಿಟಿ ಮಳೆಯಿಂದ ಉಪಯೋಗ ಇರಲಿಲ್ಲ.

ಇದನ್ನೂ ಓದಿ: ಬಯಲು ಸೀಮೆಯ ಊಟಿ | ಸ್ವರ್ಗವ ನಾಚಿಸುವ ಜೋಗಿಮಟ್ಟಿ ಬಗ್ಗೆ ನಿಮಗೆಷ್ಟು ಗೊತ್ತು..!
ಆದರೆ, ಮಂಗಳವಾರ ಮಧ್ಯಾಹ್ನ 3 ಗಂಟೆಯಿಂದ ಸುಮಾರು ಅರ್ಧ ಗಂಟೆ ಸುರಿದ ಮಳೆಯಿಂದಾಗಿ ರೈತರು ಖುಷಿಯಾಗಿದ್ದಾರೆ.
ಭಾರತೀಯ ಹವಾಮಾನ ಇಲಾಖೆ ಜುಲೈ ಎರಡನೇ ವಾರದಲ್ಲಿ ಅಂದರೆ ಮುಂದಿನ ಒಂದು ವಾರ ಚಿತ್ರದುರ್ಗ ಜಿಲ್ಲೆಗೆ ಉತ್ತಮ ಮಳೆಯಾಗುವ ಮುನ್ಸೂಚನೆ ನೀಡಿದೆ. ಅದರನ್ವಯ ಇಂದು ಸುರಿದ ಮಳೆ ಪರವಾಗಿಲ್ಲ ಎನ್ನುವಂತಿತ್ತು.
ಇದನ್ನೂ ಓದಿ: ಬದುಕು ಬೋರಾದಾಗ ರಿಫ್ರೆಶ್ ಆಗಲು ಜೋಗಿಮಟ್ಟಿಗೆ ಬನ್ನಿ | ಇಲ್ಲಿನ ಹಸಿರು, ಗಾಳಿ, ನೋಟ ನಿಮ್ಮನ್ನು ರೀಚಾರ್ಜ್ ಮಾಡುತ್ತೆ
ಚಿತ್ರದುರ್ಗದಲ್ಲಿ ಮಧ್ಯಾಹ್ನದ ನಂತರ ಸುರಿದ ಬಿರುಸಿನ ಮಳೆಯಿಂದಾಗಿ ಸಂಚಾರ ಅಸ್ತವ್ಯಸ್ತವಾಗಿತ್ತು. ಶಾಲೆ ಬಿಡುವ ಸಮಯಕ್ಕೆ ಮಲೆಯಾದ್ದರಿಂದ ಪೋಷಕರು ಮಕ್ಕಳನ್ನು ಕರೆತರಲು ಪರದಾಡಿದರು.
ನಗರದ ಹಲವು ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಆಗಿ ಪರದಾಡುವಂತಾಯಿತು. ಶಾಲೆಗಳಿಂದ ಬಂದ ನೂರಾರು ವಾಹನಗಳು ರಸ್ತೆಗಳಲ್ಲಿ ಸಿಲುಕಿಕೊಂಡಿದ್ದವು.
ಇದನ್ನೂ ಓದಿ: ಭಾನುವಾರ ಎಲ್ಲೆಲ್ಲಿ ಎಷ್ಟು ಮಳೆಯಾಯ್ತು? ಈ ವರದಿ ಓದಿ..
ತುರುವನೂರು ಗೇಟ್ನಲ್ಲಿ ಮಳೆಯ ಕಾರಣಕ್ಕೆ ಜನ ಹೆದ್ದಾರಿಯ ಅಂಡರ್ ಪಾಸ್ ಕೆಳಗೆ ಆಶ್ರಯ ಪಡೆದರು. ಬೈಕ್, ಆಟೋ, ಸಾರ್ವಜನಿಕರು ನಿಂತ ಕಾರಣಕ್ಕೆ ಇಲ್ಲಿ ಜಾಮ್ ಆಗಿತ್ತು.
ಕೆಲ ಹೊತ್ತಿನಲ್ಲೇ ಸಾಕಷ್ಟು ನೀರು ಬಂದು ಇಲ್ಲಿ ಶೇಖರಣೆಯಾಗಿದ್ದರಿಂದ ಕಾರುಗಳು ಸಂಚರಿಸಲು ಪರದಾಡುವಂತಾಗಿತ್ತು.
ಇದನ್ನೂ ಓದಿ: ಶೀಲ ಶಂಕಿಸಿ ಪತ್ನಿ ಕೊಲೆ ಮಾಡಿದ್ದ ವ್ಯಕ್ತಿಗೆ ಜೀವಾವಧಿ ಶಿಕ್ಷೆ | ಚಿತ್ರದುರ್ಗ ನ್ಯಾಯಾಲಯದಿಂದ ಆದೇಶ
ಚಳ್ಳಕೆರೆ ಗೇಟ್ನಲ್ಲಿ ಕೂಡಾ ಮಳೆಯಿಂದಾಗಿ ಸಂಚಾರಕ್ಕೆ ತುಸು ಅಡ್ಡಿಯಾಗಿತ್ತು.
ಇನ್ನೂ ಚಿತ್ರದುರ್ಗದ ಜಿಲ್ಲಾಧಿಕಾರಿ ಕಚೇರಿ ಬಳಿಯಿಂದ ಮಳೆಯ ದೃಶ್ಯ ರಮಣೀಯವಾಗಿತ್ತು. ಥೇಟ್ ಮಲೆನಾಡಿನಂತೆ ಭಾಸವಾಗುವ ಇಲ್ಲಿನ ಮರಗಿಡಗಳ ಮೇಲೆ ಮಳೆಯ ಹನಿ ಬೀಳುವ ದೃಶ್ಯ ಅಪ್ಯಾಯಮಾನವಾಗಿತ್ತು.
ಬೆಚ್ಚನೆ ಕಾಫಿಯೊಂದಿಗೆ, ಚಿತ್ರದುರ್ಗ ನ್ಯೂಸ್ನಲ್ಲಿ ಮಳೆಯ ದೃಶ್ಯ ಆಸ್ವಾಧಿಸಿ:
ಈ ಎಲ್ಲಾ ದೃಶ್ಯಗಳನ್ನು ಚಿತ್ರದುರ್ಗ ನ್ಯೂಸ್ ಪೋಟೋ ಹಾಗೂ ವೀಡಿಯೋ ರೂಪದಲ್ಲಿ ಈ ಸುದ್ದಿಯಲ್ಲಿ ನಿಮಗಾಗಿ ಕಟ್ಟಿಕೊಟ್ಟಿದೆ.
ಚಿತ್ರದುರ್ಗ ನ್ಯೂಸ್ ಯೂಟ್ಯೂಬ್ ಲಿಂಕ್ (chitradurga news yputube Link) click here:
ಮನೆಯಲ್ಲಿ ಬೆಚ್ಚಗೆ ಕುಳಿತು ಕಾಫಿ ಕುಡಿಯುತ್ತಾ, ದುರ್ಗದ ಮಳೆಯನ್ನು ಆಸ್ವಾಧಿಸಲು ಚಿತ್ರದುರ್ಗ ನ್ಯೂಸ್ ಓದುದರಿಗೆ ಬೆಚ್ಚನೆಯ ಹಿತಾನುಭವ ಕೊಟ್ಟರೆ ನಮ್ಮ ಶ್ರಮ ಸಾರ್ಥಕ.
ಇದನ್ನೂ ಓದಿ: ವಿದ್ಯುತ್ ಆರ್.ಆರ್.ನಂಬರಿಗೆ ಆಧಾರ್ ಸಂಖ್ಯೆ ಜೋಡಣೆ ಕಡ್ಡಾಯ
ಈಗಾಗಲೇ ಚಿತ್ರದುರ್ಗ ನ್ಯೂಸ್ ಓದುಗರಾಗಿರುವ ನಿಮಗೆಲ್ಲಾ ನಮ್ಮ ಮತ್ತೊಂದು ಮನವಿ. ನಮ್ಮ ಯೂಟ್ಯೂಬ್ ಚಾನೆಲ್ ಲಿಂಕ್ ಕೂಡಾ ಈ ಸುದ್ದಿಯಲ್ಲಿದ್ದು, ಅದನ್ನೂ SUBCRIBE ಮಾಡಿಕೊಂಡು, ಚಿತ್ರದುರ್ಗಕ್ಕೆ ಸಂಬಂಧಿಸಿದ ಹೆಚ್ಚು ಹೆಚ್ಚು ಸುದ್ದಿ, ವೀಡಿಯೋಗಳನ್ನು ನಿಮ್ಮ ಮುಂದಿಡಲು ಪ್ರೋತ್ಸಾಹಿಸಲು ಮನವಿ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
