By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Reading: B.G.Govindappa: ಮಾಡದಕೆರೆ, ಮತ್ತೋಡು ಹೋಬಳಿಗಳಿಗೆ ವಿವಿ ಸಾಗರದ ನೀರು ಕೊಡಿ | ಶಾಸಕ ಬಿ.ಜಿ.ಗೋವಿಂದಪ್ಪ
Share
Font ResizerAa
Chitradurga News-Kannada NewsChitradurga News-Kannada News
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2022 Foxiz News Network. Ruby Design Company. All Rights Reserved.

Home » B.G.Govindappa: ಮಾಡದಕೆರೆ, ಮತ್ತೋಡು ಹೋಬಳಿಗಳಿಗೆ ವಿವಿ ಸಾಗರದ ನೀರು ಕೊಡಿ | ಶಾಸಕ ಬಿ.ಜಿ.ಗೋವಿಂದಪ್ಪ

ಹೊಸದುರ್ಗ

B.G.Govindappa: ಮಾಡದಕೆರೆ, ಮತ್ತೋಡು ಹೋಬಳಿಗಳಿಗೆ ವಿವಿ ಸಾಗರದ ನೀರು ಕೊಡಿ | ಶಾಸಕ ಬಿ.ಜಿ.ಗೋವಿಂದಪ್ಪ

chitradurganews.com
Last updated: 24 October 2024 09:38
chitradurganews.com
8 months ago
Share
ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ
ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ
SHARE
https://chat.whatsapp.com/Jhg5KALiCFpDwME3sTUl7x

CHITRADURGA NEWS | 24 OCTOBER 2024

ಹೊಸದುರ್ಗ: ವಾಣಿವಿಲಾಸ ಸಾಗರದ ಹಿನ್ನೀರಿನ ಅಂಚಿನಲ್ಲೇ ಇರುವ ಮಾಡದಕೆರೆ ಹಾಗೂ ಮತ್ತೋಡು ಹೋಬಳಿಯ ಎಲ್ಲ ಗ್ರಾಮಗಳ ಭೂಮಿ ಹಾಗೂ ಕೆರೆಗಳಿಗೆ ವಿವಿ ಸಾಗರದ ನೀರು ಒದಗಿಸಬೇಕು ಎಂದು ಶಾಸಕ ಬಿ.ಜಿ.ಗೋವಿಂದಪ್ಪ (B.G.Govindappa) ಅಭಿಪ್ರಾಯಪಟ್ಟಿದ್ದಾರೆ.

ಹೊಸದುರ್ಗ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಹಿನ್ನೀರಿನ ಅಂಚಿನಲ್ಲೇ ಇರುವ ಈ ಎರಡು ಹೋಬಳಿಗಳ ಜನರಿಗೆ ನೀರು ಸಿಗಬೇಕು ಎಂದು ತಿಳಿಸಿದರು.

ಇದನ್ನೂ ಓದಿ: ವಿವಿ ಸಾಗರಕ್ಕೆ ಒಂದೇ ದಿನ 1 ಟಿಎಂಸಿ ನೀರು | ಈ ವರ್ಷ ಕೋಡಿ ಪಕ್ಕಾ

ಹಿನ್ನೀರು ಭಾಗದಲ್ಲಿರುವ ಎರಡು ಹೋಬಳಿಗಳಿಗೆ ನೀರು ಒದಗಿಸುವ ಸಂಬಂಧ ಸಮೀಕ್ಷೆ ನಡೆಸಿ, ಸ್ಥಳ ಪರಿಶೀಲನೆ ಮಾಡಿ, ಸರ್ಕಾರಕ್ಕೆ ವರದಿ ನೀಡಲಾಗುವುದು ಎಂದರು.

ವಿವಿ ಸಾಗರಕ್ಕೆ ಗೇಟ್ ಅಳವಡಿಕೆಗೆ ಮನವಿ: ವಿವಿ ಸಾಗರ ಜಲಾಶಯದ ನೀರು 130 ಅಡಿಯೇ ಇರಲಿ, ಅದಕ್ಕೇನು ನಮ್ಮ ತಕರಾರು ಇಲ್ಲ. ಆದರೆ, 134 ಅಡಿ ತಲುಪಿದಾಗ ನೀರನ್ನು ಗೇಟ್ ಮೂಲಕ ಹೊರಹಾಕಬೇಕು ಎಂದು ಬಿ.ಜಿ.ಗೋವಿಂದಪ್ಪ ಹೇಳಿದ್ದಾರೆ.

ಇದನ್ನೂ ಓದಿ: ವಿವಿ ಸಾಗರಕ್ಕೆ ಭರ್ಜರಿ ನೀರು | ಮೈದುಂಬಿ ಹರಿಯುತ್ತಿರುವ ವೇದಾವತಿ

ಕೆ.ಆರ್.ಎಸ್. ಸೇರಿದಂತೆ ಅನೇಕ ಜಲಾಶಯಗಳಿಗೆ ಗೇಟ್ ಅಳವಡಿಸಲಾಗಿದೆ. ಅದರಂತೆಯೇ ವಿಶ್ವೇಶ್ವರಯ್ಯ ಜಲ ನಿಗಮದವರ ಬಳಿ ಚರ್ಚಿಸಿ, 120 ಕೋಟಿ ರೂ ವೆಚ್ಚದಲ್ಲಿ ಗೇಟ್ ನಿರ್ಮಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಹೆಚ್ಚಾದ ನೀರನ್ನು ಗೇಟ್ ಮೂಲಕ ಹೊರಹಾಕಿ, ಕೋಡಿ ಬಾಯಿಂದ ನೀರು ಹೋಗುವುದನ್ನು ತಪ್ಪಿಸಬೇಕು ಎಂದು ತಿಳಿಸಿದ್ದಾರೆ.

ಹಿರಿಯೂರು ರೈತರು ನಮ್ಮ ರೈತರ ಸಂಕಷ್ಟ ನೋಡಿ:

ಹಿರಿಯೂರು ತಾಲ್ಲೂಕಿನ ರೈತರು ಹೊಸದುರ್ಗ ತಾಲ್ಲೂಕಿನ ವಿವಿ ಸಾಗರದ ಹಿನ್ನೀರಿನ ಗ್ರಾಮಗಳಿಗೆ ಭೇಟಿ ನೀಡಿ, ರೈತರ ಸಂಕಷ್ಟ ಕಣ್ಣಾರೆ ಕಂಡು ಪರಿಹಾರ ಕಂಡುಕೊಳ್ಳಿ ಎಂದು ಶಾಸಕ ಬಿ.ಜಿ. ಗೋವಿಂದಪ್ಪ ಮನವಿ ಮಾಡಿದ್ದಾರೆ.

ವಾಣಿ ವಿಲಾಸ ಸಾಗರ ಜಲಾಶಯ ಈಗಾಗಲೇ ಭರ್ತಿಯಾಗುತ್ತಿದ್ದು, ಕೋಡಿ ಬೀಳುವ ಹಂತದಲ್ಲಿದೆ. 2022 ರಲ್ಲಿ ಕೋಡಿ ಬಿದ್ದಾಗ ತಾಲ್ಲೂಕಿನ ಹಿನ್ನೀರಿನ ಜನತೆ ಅಪಾರ ನಷ್ಟ ಅನುಭವಿಸಿದ್ದರು.

ಇದನ್ನೂ ಓದಿ: ನೀರಿನಲ್ಲಿ ಸಿಲುಕಿದ ಟ್ರ್ಯಾಕ್ಟರ್ | ನಾಯಕನಹಟ್ಟಿ ಹೊರಮಠ ಜಲಾವೃತ

ವಿವಿ ಸಾಗರದ ನಿರ್ಮಾಣಕ್ಕೆ 25 ಸಾವಿರ ಎಕರೆ ಭೂಮಿ ನೀಡಿರುವುದು ನಮ್ಮ ರೈತರ ಉದಾರ ಗುಣ, ಆದರೆ, ಇಂದು ಅದೇ ಹಿನ್ನೀರಿನಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ವಿವಿ ಸಾಗರ ಜಲಾಶಯ ಪಕ್ಕದಲ್ಲಿಯೇ ಇದ್ದರೂ ಹಿನ್ನೀರಿನ ಅಂಚಿನಲ್ಲಿರುವ ತಾಲ್ಲೂಕಿನ ಜನರಿಗೆ ನೀರು ದೊರೆಯುತ್ತಿಲ್ಲ.

ಅಂತರ್ಜಲ ಮಟ್ಟವೂ ಸಹ ವೃದ್ಧಿಸುತ್ತಿಲ್ಲ. ಕೆರೆ, ಬಾವಿ, ಕೊಳವೆಬಾವಿ ಹಾಗೂ ಜಮೀನುಗಳಲ್ಲಿಯೂ ನೀರಿಲ್ಲ. 700 ಅಡಿ ಕೊಳವೆಬಾವಿ ಕೊರೆಯಿಸಿದರೂ ನೀರು ದೊರೆಯುತ್ತಿಲ್ಲ. ವಿವಿ ಸಾಗರದ ಭರ್ತಿಯಿಂದ ಒಂದು ಕಡೆ ಸಂತಸ, ಮತ್ತೊಂದೆಡೆ ಸಂಕಟವಿದೆ. ಪಕ್ಷದಿಂದ ಹೊರಬಂದು ಮಣ್ಣಿನ ಮಕ್ಕಳು ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಎರಡೂ ಕಡೆ ರೈತರು ವಿಶ್ವಾಸಯುತವಾಗಿ ನಡೆದುಕೊಳ್ಳುವಂತಾಗಬೇಕು ಎಂದರು.

ಇದನ್ನೂ ಓದಿ: ಕರ್ತವ್ಯ ಲೋಪ | PDO ಅಮಾನತು

ಹಿಂದೆ ಮಹಾರಾಜರು ಭೂಮಿ ಕೊಟ್ಟ ರೈತರಿಗೆ ಪರಿಹಾರವನ್ನು ನೀಡಿದ್ದಾರೆ. ಆದರೀಗ ವಿವಿ ಸಾಗರ ಜಲಾಶಯ ಭರ್ತಿಯಾದರೆ, ಖಾತೆ ಜಮೀನುಗಳಿಗೆ ನೀರು ನೀರು ನುಗ್ಗುತ್ತದೆ, ತೇವಾಂಶ ಹೆಚ್ಚಾಗಿ ಮನೆ ಗೋಡೆಗಳು ಬಿರುಕು ಬಿಡುತ್ತವೆ ಎಂದು ವಿವರಿಸಿದ್ದಾರೆ.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

TAGGED:b.g.govindappaChitradurgaChitradurga newsChitradurga UpdatesHinneeruHiriyurHosadurgaJalashayaKannada NewsMadadakereMattoduMLA BG GovindappaVV Sagarಕನ್ನಡ ಸುದ್ದಿಚಿತ್ರದುರ್ಗಚಿತ್ರದುರ್ಗ ಅಪ್ಡೇಟ್ಸ್ಚಿತ್ರದುರ್ಗ ನ್ಯೂಸ್ಜಲಾಶಯಮತ್ತೋಡುಮಾಡದಕೆರೆವಿವಿ ಸಾಗರಶಾಸಕ ಬಿ.ಜಿ.ಗೋವಿಂದಪ್ಪಹಿನ್ನೀರುಹಿರಿಯೂರುಹೊಸದುರ್ಗ
Share This Article
Facebook Email Print
Previous Article Vanivilasa sagara Inflow: ವಿವಿ ಸಾಗರಕ್ಕೆ ಒಂದೇ ದಿನದಲ್ಲಿ 1 ಟಿಎಂಸಿ ನೀರು | ಈ ವರ್ಷ ಕೋಡಿ ಪಕ್ಕಾ..
Next Article ವಾಣಿವಿಲಾಸ ಸಾಗರ ಜಲಾಶಯ VVS DAM: ವಿವಿ ಸಾಗರ ಭರ್ತಿಗೆ ಇನ್ನು 3 ಅಡಿ ಮಾತ್ರ ಬಾಕಿ | 126 ಅಡಿ ದಾಟಿದ ಜಲಾಶಯ
Leave a Comment

Leave a Reply Cancel reply

Your email address will not be published. Required fields are marked *

today bhavishya
Astrology: ದಿನ ಭವಿಷ್ಯ | ಜೂನ್ 21 | ವೃತ್ತಿಪರ ಉದ್ಯೋಗಗಳಲ್ಲಿ ಕಿರಿಕಿರಿ, ಆರ್ಥಿಕ ಲಾಭ ದೊರೆಯುತ್ತದೆ, ಪ್ರಯಾಣವನ್ನು ಮುಂದೂಡುವುದು ಉತ್ತಮ
Dina Bhavishya
arecanut price list
ಅಡಿಕೆ ಧಾರಣೆ | ಯಾವ ಮಾರುಕಟ್ಟೆಯಲ್ಲಿ ಎಷ್ಟು ರೇಟ್‌
ಅಡಕೆ ಧಾರಣೆ
ಮೆಟ್ರಿಕ್ ಪೂರ್ವ ಮತ್ತು ನಂತರದ ವಿದ್ಯಾರ್ಥಿ ವೇತನಕ್ಕೆ ಅರ್ಜಿ
ಮುಖ್ಯ ಸುದ್ದಿ
Power Cut chitradurga News (3)
ನಾಳೆ ವಿದ್ಯುತ್ ವ್ಯತ್ಯಯ | ಎಲ್ಲೆಲ್ಲಿ ಕರೆಂಟ್ ಇರಲ್ಲ?
ಹಿರಿಯೂರು
© Chitradurga News. Ruby Design Company. All Rights Reserved.

Chitradurga News App

Install
Welcome Back!

Sign in to your account

Username or Email Address
Password

Lost your password?

Not a member? Sign Up