Connect with us

    Kabbadi; ಶ್ರೀಗುರು ತಿಪ್ಪೇರುದ್ರಸ್ವಾಮಿ ಪ್ರೌಢಶಾಲೆಗೆ ಕಬಡ್ಡಿಯಲ್ಲಿ ಪ್ರಥಮ ಸ್ಥಾನ

    ಶ್ರೀಗುರು ತಿಪ್ಪೇರುದ್ರಸ್ವಾಮಿ ಪ್ರೌಢಶಾಲೆಗೆ ಕಬಡ್ಡಿಯಲ್ಲಿ ಪ್ರಥಮ ಸ್ಥಾನ

    ಮುಖ್ಯ ಸುದ್ದಿ

    Kabbadi; ಶ್ರೀಗುರು ತಿಪ್ಪೇರುದ್ರಸ್ವಾಮಿ ಪ್ರೌಢಶಾಲೆಗೆ ಕಬಡ್ಡಿಯಲ್ಲಿ ಪ್ರಥಮ ಸ್ಥಾನ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 08 OCTOBER 2024

    ಚಿತ್ರದುರ್ಗ: ನಗರದ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಕ್ರೀಡಾ ಜಾತ್ರೆಯ ಕಬ್ಬಡಿ(Kabbadi) ಪಂದ್ಯಾವಳಿಯಲ್ಲಿ ಚಳ್ಳಕೆರೆ ತಾಲೂಕಿನ ಮಲ್ಲೂರಹಟ್ಟಿ ಗ್ರಾಮದ ಶ್ರೀಗುರು ತಿಪ್ಪೇರುದ್ರಸ್ವಾಮಿ ಪ್ರೌಢ ಶಾಲೆಯ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದಿದೆ.

    ಕ್ಲಿಕ್ ಮಾಡಿ ಓದಿ: Apmc: ಮಾರುಕಟ್ಟೆ ಧಾರಣೆ | ಅಕ್ಟೋಬರ್ 08 | ಚಿತ್ರದುರ್ಗದಲ್ಲಿ ಇಂದಿನ ಹತ್ತಿ ರೇಟ್

    ಶರಣ ಸಂಸ್ಕೃತಿ ಉತ್ಸವ ಹಾಗೂ ಜಯದೇವ ಜಗದ್ಗುರುಗಳ ನೆನಪಿಗಾಗಿ ಮುರುಘಾ ಮಠದ ವತಿಯಿಂದ ಕ್ರೀಡಾ ಜಾತ್ರೆ ಆಯೋಜಿಸಲಾಗಿತ್ತು.

    ತಡರಾತ್ರಿ ನಡೆದ ಸಮಾರಂಭದಲ್ಲಿ ಗೆಲುವು ಸಾಧಿಸಿದ್ದ ಬಾಲಕಿಯರ ತಂಡಕ್ಕೆ ಬಹುಮಾನ ನೀಡಲಾಯಿತು.

    ಈ ವೇಳೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ, ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಜಿಎಂ ಅನಿತ್ ಕುಮಾರ್ ಸೇರಿದಂತೆ ಇತರರು ಇದ್ದರು.

    ಕ್ಲಿಕ್ ಮಾಡಿ ಓದಿ: VV sagara; ವಾಣಿವಿಲಾಸ ಜಲಾಶಯಕ್ಕೆ ಒಂದೇ ವಾರದಲ್ಲಿ ಹರಿದು ಬಂತು ಒಂದು TMC ನೀರು

    ಮಲ್ಲೂರಹಟ್ಟಿ ಪ್ರೌಢಶಾಲೆಯ ಮಕ್ಕಳ ಸಾಧನೆಗೆ ಚಳ್ಳಕೆರೆ BEO ಕೆ.ಎಸ್.ಸುರೇಶ್, ಜಿಲ್ಲಾ ಮದಕರಿ ನಾಯಕ ವಿಧ್ಯಾಸಂಸ್ಥೆ ಅಧ್ಯಕ್ಷ ಎಸ್.ಸಂದೀಪ್ ಹಾಗೂ ಶಾಲೆಯ ಶಿಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top