CHITRADURGA NEWS | 27 MARCH 2024
ಚಿತ್ರದುರ್ಗ: ವರ್ಷದ ಎರಡು ದಿನ ಯೋಗಿಪುರುಷ ತಿಪ್ಪೇರುದ್ರಸ್ವಾಮಿಯ ನೆಲೆಬೀಡು ನಾಯಕನಹಟ್ಟಿ ನಿದ್ರಿಸುವುದಿಲ್ಲ. ಬರೋಬ್ಬರಿ 48 ಗಂಟೆ ಇಡೀ ಊರು ಎಚ್ಚರವಾಗಿರುತ್ತದೆ.
ಕ್ಲಿಕ್ ಮಾಡಿ ಓದಿ: ಹೊಸಪೇಟೆ ಕಾರಿನಲ್ಲಿತ್ತು ₹ 20.35 ಲಕ್ಷ | ಚೆಕ್ ಪೋಸ್ಟ್ನಲ್ಲಿ ಹಣ ವಶ
ಒಳಮಠ ಹಾಗೂ ಹೊರ ಮಠದ ಮುಂಭಾಗದ ರಾತ್ರಿ 11 ಗಂಟೆಯಾದರು ಜನರು ಕೊಬ್ಬರಿ ಸುಟ್ಟು ದೇವರಿಗೆ ಭಕ್ತಿ ಸಮರ್ಪಿಸುತ್ತಿದ್ದ ದೃಶ್ಯ ಹಗಲಿನಂತೆ ಕಂಡು ಬಂದಿತು. ರಥ ಬೀದಿಯಲ್ಲಿ ವಿರಾಜನಮಾನವಾಗಿದ್ದ ರಥಕ್ಕೆ ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಇಡೀ ಊರಿನ ಪ್ರತಿ ಬೀದಿಯಲ್ಲಿ ಜನರಿಂದ ತುಂಬಿತ್ತು. ಅದು ರಾತ್ರಿ 12 ರ ಸುಮಾರಿಗೆ !.
ಕ್ಲಿಕ್ ಮಾಡಿ ಓದಿ: ಅಡಿಕೆ ಧಾರಣೆ | 26 ಮಾರ್ಚ್ | ಯಾವ ಮಾರುಕಟ್ಟೆಯಲ್ಲಿ ಎಷ್ಟಿತ್ತು ಅಡಿಕೆ ರೇಟ್
ಇಡೀ ಊರಿಗೆ ಊರೇ ಹಾಸಿಗೆ ಆಕಾಶವೇ ಹೊದಿಕೆ ಎಂಬಂತೆ ಭಕ್ತರು ರಸ್ತೆ ಬದಿ, ಒಳಮಠ, ಹೊರ ಮಠದ ಆವರಣ,ಈಶ್ವರನ ದೇಗುಲ, ಪೋಲಿಸ್ ವಾಚ್ ಟವರ್, ಮನೆಗಳ ಅಂಗಳಗಳಲ್ಲಿ ತಮ್ಮ ಬ್ಯಾಗ್ಗಳನ್ನು ತಲೆಗೆ ಇಟ್ಟು ಕೊಂಡು ಸಾಲು ಸಾಲಾಗಿ ನಿದ್ರೆಗೆ ಜಾರಿದ್ದರು. ಎಚ್ಚರವಾದ ಕೂಡಲೇ ಒಂದು ಸುತ್ತು ಹಾಕಿ ಪುನಃ ಭಜನೆ ಪದ ಹಾಡುತ್ತಾ ಇಡೀ ರಾತ್ರಿ ಕಾಲ ಕಳೆದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number