By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Reading: ಕೋಟೆನಾಡಿಗೆ ‘ರೆಬೆಲ್’ ವಿಜಯಯಾತ್ರೆ ; ಬ್ಯಾಡ್ ಮ್ಯಾನರ್ಸ್ ಜತೆ ಅಭಿಷೇಕ್ ಅಂಬರೀಶ್‌ ಜತೆ ದುನಿಯಾ ಸೂರಿ, ರಚಿತಾ ರಾಮ್ ಎಂಟ್ರಿ
Share
Font ResizerAa
Chitradurga News-Kannada NewsChitradurga News-Kannada News
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2022 Foxiz News Network. Ruby Design Company. All Rights Reserved.

Home » ಕೋಟೆನಾಡಿಗೆ ‘ರೆಬೆಲ್’ ವಿಜಯಯಾತ್ರೆ ; ಬ್ಯಾಡ್ ಮ್ಯಾನರ್ಸ್ ಜತೆ ಅಭಿಷೇಕ್ ಅಂಬರೀಶ್‌ ಜತೆ ದುನಿಯಾ ಸೂರಿ, ರಚಿತಾ ರಾಮ್ ಎಂಟ್ರಿ

ಮುಖ್ಯ ಸುದ್ದಿ

ಕೋಟೆನಾಡಿಗೆ ‘ರೆಬೆಲ್’ ವಿಜಯಯಾತ್ರೆ ; ಬ್ಯಾಡ್ ಮ್ಯಾನರ್ಸ್ ಜತೆ ಅಭಿಷೇಕ್ ಅಂಬರೀಶ್‌ ಜತೆ ದುನಿಯಾ ಸೂರಿ, ರಚಿತಾ ರಾಮ್ ಎಂಟ್ರಿ

News Desk Chitradurga News
Last updated: 30 November 2023 08:04
News Desk Chitradurga News
2 years ago
Share
Bad Manners
SHARE
https://chat.whatsapp.com/Jhg5KALiCFpDwME3sTUl7x

ಚಿತ್ರದುರ್ಗ ನ್ಯೂಸ್.ಕಾಂ

ಕೋಟೆನಾಡಿಗೆ ‘ಬ್ಯಾಡ್ ಮ್ಯಾನರ್ಸ್’ ಆಗಮನಕ್ಕೆ ಇನ್ನೂ ಕೆಲ ಗಂಟೆಗಳು ಬಾಕಿ ಉಳಿದಿವೆ. ನ.24 ರಂದು ಬೆಳ್ಳಿ ತೆರೆಗೆ ಅಪ್ಪಳಿಸಿದ ದುನಿಯಾ ಸೂರಿ & ಅಭಿಷೇಕ್ ಅಂಬರೀಶ್ ಕಾಂಬಿನೇಷನ್‌ನ ‘ಬ್ಯಾಡ್ ಮ್ಯಾನರ್ಸ್’ ಬಾಕ್ಸ್‌ ಆಫೀಸ್‌ನಲ್ಲಿ ಅಬ್ಬರಿಸುತ್ತಿದೆ.

ಇದನ್ನೂ ಓದಿ: ಹ್ಯಾಂಡ್‌ಬಾಲ್ ಅಂಕಣಕ್ಕೆ ಇಳಿದ ಶಾಸಕ ಕೆ.ಸಿ.ವೀರೇಂದ್ರ; ಕ್ರೀಡಾಪಟುಗಳಲ್ಲಿ ಹೆಚ್ಚಿದ ಹುಮ್ಮಸ್ಸು

Bad Mannersಚಿತ್ರದ ಯಶಸ್ಸಿನ ಹಿನ್ನಲೆಯಲ್ಲಿ ‘ಬ್ಯಾಡ್ ಮ್ಯಾನರ್ಸ್’ ಚಿತ್ರತಂಡ ನ.30 (ಗುರುವಾರ)ರ ಮಧ್ಯಾಹ್ನ 12.15ಕ್ಕೆ ವಿಜಯ ಯಾತ್ರೆ ಮೂಲಕ ಚಿತ್ರದುರ್ಗಕ್ಕೆ ಆಗಮಿಸುತ್ತಿದೆ. ನಗರದ ಪ್ರಸನ್ನ ಚಿತ್ರಮಂದಿರಕ್ಕೆ ನಟ ಅಭಿಷೇಕ್ ಅಂಬರೀಶ್, ನಿರ್ದೇಶಕ ದುನಿಯಾ ಸೂರಿ, ನಟಿ ರಚಿತಾ ರಾಮ್‌ ಹಾಗೂ ಇಡೀ ‘ಬ್ಯಾಡ್ ಮ್ಯಾನರ್ಸ್’ ತಂಡ ಆಗಮಿಸುತ್ತಿದೆ.

Bad Mannersಈಗಾಗಲೇ ಚಿತ್ರತಂಡ ವಿಜಯ ಯಾತ್ರೆಯನ್ನು ಮಂಡ್ಯ, ಮದ್ದೂರು, ಮೈಸೂರು, ತುಮಕೂರಿನಲ್ಲಿ ಯಶಸ್ವಿಗೊಳಿಸಿದ್ದು, ಇದೀಗ ಚಿತ್ರದುರ್ಗಕ್ಕೆ ಆಗಮಿಸುತ್ತಿದೆ. ತಂಡಕ್ಕೆ ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಸಾಥ್‌ ನೀಡಲಿದ್ದಾರೆ ಎಂದು ಪ್ರಸನ್ನ ಚಿತ್ರಮಂದಿರದ ವ್ಯವಸ್ಥಾಪಕರು ತಿಳಿಸಿದ್ದಾರೆ.

ಇದನ್ನೂ ಓದಿ: ದಾಖಲೆ ಇಲ್ಲದ 8 ಕೋಟೆ ವಶ

Bad Manners
ಅಮರ್‌ ಬಳಿಕ ಸೂರಿ ನಿರ್ದೇಶನಕದಲ್ಲಿ ಅಭಿಷೇಕ್ ಅಂಬರೀಶ್ ಕೈಯಲ್ಲಿ ಗನ್‌ ಹಿಡಿದು ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಅಖಾಡಕ್ಕಿಳಿದಿದ್ದಾರೆ. ಪೊಲೀಸ್ ಅಧಿಕಾರಿ ಪಾತ್ರಕ್ಕೆ ಅವರದ್ದು ಹೇಳಿ ಮಾಡಿಸಿದ ಮೈಕಟ್ಟು. ಫೈಟ್‌ಗಳನ್ನು ಕೂಡ ಸಲೀಸಲಾಗಿ ಮಾಡಿರುವುದು ಪ್ರೇಕ್ಷರನ್ನು ಫಿದಾಗೊಳಿಸಿದೆ.

Bad Manners
ಪುಟ್ಟಣ್ಣ ಕಣಗಲ್‌ ನಿರ್ದೇಶನದ ನಾಗರಹಾವು ಚಿತ್ರದ ಮೂಲಕ ‘ಕ್ಯಾರೆ ಬುಲ್‌ಬುಲ್‌’ ಎನ್ನುತ್ತಾ ಜಲೀಲಾನ ಮೂಲ ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡಿದ ಅಂಬರೀಷ್‌ ಮುಂದೆ ರೆಬಲ್‌ ಸ್ಟಾರ್‌ ಆಗಿ ಮಿಂಚಿ ಅಭಿಮಾನಗಳ ಮನದಲ್ಲಿ ವಿರಾಜಮಾನವಾಗಿದ್ದಾರೆ.

ಅಂಬರೀಷ್‌ ಪುತ್ರ ಅಭಿಷೇಕ್ ಅಂಬರೀಶ್‌ ಗೂ ಕೂಡ ಚಿತ್ರದುರ್ಗ ಎಂದರೆ ಎಲ್ಲಿಲ್ಲದ ಪ್ರೀತಿ. ಆ ಕಾರಣಕ್ಕೆ ಕೆಲ ತಿಂಗಳ ಅಂತರದಲ್ಲಿ ಮೂರನೇ ಬಾರಿ ಕೋಟೆನಾಡಿಗೆ ಆಗಮಿಸುತ್ತಿದ್ದಾರೆ.

Bad Mannersಸೆ.21 ಹಿಂದೂ ಮಹಾಗಣಪತಿ ಬಳಿ ರೈತರಿಗಾಗಿ ಪ್ರಾರ್ಥನೆ ಮಾಡಿದ್ದ ಅಭಿಷೇಕ್‌ ಪುನಃ ಅ.8 ರಂದು ಹಿಂದೂ ಮಹಾಗಣಪತಿ ಶೋಭಾಯಾತ್ರೆಯಲ್ಲಿ ಭಾಗಿಯಾಗಿದ್ದರು. ಇದೀಗ ’ಬ್ಯಾಡ್ ಮ್ಯಾನರ್ಸ್’ ಮೂಲಕ ಪುನಃ ಆಗಮಿಸುತ್ತಿದ್ದಾರೆ. ಇವರ ಆಗಮನದ ಕ್ಷಣವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರರಾಗಿದ್ದಾರೆ.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

TAGGED:Abhishek AmbarishBad MannersChitradurgaCinemaDunia SuriFilm TeamRachita RamVijayayatraVirendra Pappyಅಭಿಷೇಕ್ ಅಂಬರೀಶ್ಚಿತ್ರ ತಂಡಚಿತ್ರದುರ್ಗದುನಿಯಾ ಸೂರಿಬ್ಯಾಡ್ ಮ್ಯಾನರ್ಸ್ರಚಿತಾ ರಾಮ್ವಿಜಯಯಾತ್ರೆವೀರೇಂದ್ರ ಪಪ್ಪಿಸಿನಿಮಾ
Share This Article
Facebook Email Print
Previous Article ಹೊಳಲ್ಕೆರೆ ಪೊಲೀಸ್ ಠಾಣೆ ದಾಖಲೆ ಇಲ್ಲದ 8 ಕೋಟಿ ರೂ. ಜಪ್ತಿ ? ಹೊಳಲ್ಕೆರೆ ಪೊಲೀಸರ ಕಾರ್ಯಾಚರಣೆ
Next Article ತೇಜೋವಧೆಗೆ ಮುಂದಾದರೆ ಸುಮ್ಮನಿರಲ್ಲ; ಶಾಸಕ ಎನ್.ವೈ.ಗೋಪಾಲಕೃಷ್ಣ ಎಚ್ಚರಿಕೆ
Leave a Comment

Leave a Reply Cancel reply

Your email address will not be published. Required fields are marked *

ಉಸಿರಾಟದ ಕಾಯಿಲೆಗಳಿಗೆ ಈ ಎಲೆಯನ್ನು ಬಳಸಿ
Life Style
ಹೃದಯಾಘಾತದ ನಂತರ ಈ ತಪ್ಪುಗಳನ್ನು ಮಾಡಬೇಡಿ
Life Style
ಸ್ವಸ್ತಿಕ್ ಚಿಹ್ನೆ ಬಿಡಿಸುವಾಗ ನೀವು ಈ ತಪ್ಪನ್ನು ಮಾಡಬೇಡಿ
Life Style
today bhavishya
Astrology: ದಿನ ಭವಿಷ್ಯ | ಜೂನ್ 29 | ಆಕಸ್ಮಿಕ ಧನ ವ್ಯಯದ ಸೂಚನೆ, ಆಸ್ತಿ ವಿಷಯಗಳಲ್ಲಿ ವಿವಾದಗಳು
Dina Bhavishya
© Chitradurga News. Ruby Design Company. All Rights Reserved.

Chitradurga News App

Install
Welcome Back!

Sign in to your account

Username or Email Address
Password

Lost your password?

Not a member? Sign Up