By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Reading: ಐದು ವರ್ಷದ ಬಳಿಕ ನಾಯಕನಹಟ್ಟಿಗೆ ದಡ್ಲು ಮಾರಮ್ಮ ದೇವಿ ಆಗಮನ ‌| ಬಾಗಿಲು ಮುಚ್ಚಲಿದೆ ತಿಪ್ಪೇಶನ ದೇಗುಲ
Share
Font ResizerAa
Chitradurga News-Kannada NewsChitradurga News-Kannada News
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2022 Foxiz News Network. Ruby Design Company. All Rights Reserved.

Home » ಐದು ವರ್ಷದ ಬಳಿಕ ನಾಯಕನಹಟ್ಟಿಗೆ ದಡ್ಲು ಮಾರಮ್ಮ ದೇವಿ ಆಗಮನ ‌| ಬಾಗಿಲು ಮುಚ್ಚಲಿದೆ ತಿಪ್ಪೇಶನ ದೇಗುಲ

ಮುಖ್ಯ ಸುದ್ದಿ

ಐದು ವರ್ಷದ ಬಳಿಕ ನಾಯಕನಹಟ್ಟಿಗೆ ದಡ್ಲು ಮಾರಮ್ಮ ದೇವಿ ಆಗಮನ ‌| ಬಾಗಿಲು ಮುಚ್ಚಲಿದೆ ತಿಪ್ಪೇಶನ ದೇಗುಲ

News Desk Chitradurga News
Last updated: 8 January 2024 07:47
News Desk Chitradurga News
1 year ago
Share
SHARE
https://chat.whatsapp.com/Jhg5KALiCFpDwME3sTUl7x

CHITRADURGA NEWS | 7 JANUARY 2024

ನಾಯಕನಹಟ್ಟಿ (NAYAKANAHATTI): ಕಾಯಕಯೋಗಿ, ನಾಯಕನಹಟ್ಟಿಯ ದೈವ ಶ್ರೀ ಗುರು ತಿಪ್ಪೇರುದ್ರಸ್ವಾಮಿಯ ಮಾತಿಗೆ ಗ್ರಾಮ ತೊರೆದು ಸಮೀಪದ ದೇವರಹಳ್ಳಿಯ ನೆಲೆಸಿರುವ ನಾಯಕನಹಟ್ಟಿ ಪಟ್ಟಣದ ಗ್ರಾಮ ದೇವತೆ ದಡ್ಲು ಮಾರಮ್ಮ ದೇವಿ ಐದು ವರ್ಷದ ಬಳಿಕ ಗ್ರಾಮಕ್ಕೆ ಆಗಮಿಸುತ್ತಿದೆ. 2020 ರ ಜನವರಿ 6 ರಂದು 13 ವರ್ಷದ ಬಳಿಕ ಬಂದಿದ್ದ ದೇವಿ ಇದೀಗ ಪುನಃ ಆಗಮಿಸುತ್ತಿರುವುದು ಭಕ್ತರಲ್ಲಿ ಹರ್ಷ ತಂದಿದೆ.

ಜ.30 ರಿಂದ ಫೆ.1 ರವರೆಗೆ ಮೂರು ದಿನ ಪಟ್ಟಣದಲ್ಲಿ ಬುಡಕಟ್ಟು ಸಂಸ್ಕೃತಿ ಹಾಗೂ ಸಂಪ್ರದಾಯಗಳು ಅನಾವರಣಗೊಳ್ಳಲಿವೆ. ದೇವಿಯ ಆಗಮನ ದಿನ ಸಂಪ್ರದಾಯದಂತೆ ಗುರು ತಿಪ್ಪೇರುದ್ರಸ್ವಾಮಿಯ ದೇವಸ್ಥಾನದ ಬಾಗಿಲು ಮುಚ್ಚಲಿದೆ.

ಇದನ್ನೂ ಓದಿ: ಮಾಡದಕೆರೆ-ಎಚ್.ಡಿ.ಪುರ ಭಾಗದಲ್ಲಿ ಹದ ಮಳೆ | ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ ವರದಿ ನೋಡಿ

ಜ.30 ರಂದು ಸಂಜೆ 4 ಗಂಟೆಗೆ ದೇವರಹಳ್ಳಿಯಿಂದ ಸಕಲ ಬಿರುದಾವಳಿಯೊಂದಿಗೆ ನಾಯಕನಹಟ್ಟಿಗೆ ದೇವಿ ಆಗಮಿಸಲಿದೆ. ತಮಟೆ, ಉರಿಮೆ, ಜಾನಪದ ವಾದ್ಯಗಳೊಂದಿಗೆ ಕೆ.ಇ.ಬಿ ಬಳಿಯಲ್ಲಿ ನಿರ್ಮಿಸುವ ವಿಶ್ರಾಂತಿ ಕಟ್ಟೆ ಮೇಲೆ ಕರಿ ಕಂಬಳಿ ಹಾಕಿ ದೇವಿಯ ಪೆಟ್ಟಿಗೆಯನ್ನು ಪ್ರತಿಷ್ಟಾಪಿಸಿ ಪೂಜೆ ಸಲ್ಲಿಸಲಾಗುತ್ತದೆ.

31 ರಂದು ಬೆಳಿಗ್ಗೆ ಪಟ್ಟಣದ ಕೋಟೆ ಬಡಾವಣೆಯಲ್ಲಿರುವ ದಡ್ಲುಮಾರಮ್ಮ ದೇವಿ ದೇವಸ್ಥಾನದಲ್ಲಿನ ಉತ್ಸವಮೂರ್ತಿಯನ್ನು ಗಂಗಾಪೂಜೆಗಾಗಿ ದೊಡ್ಡಹಳ್ಳಕ್ಕೆ ಕೊಂಡೊಯ್ಯಲಾಗುತ್ತದೆ. ಈ ವೇಳೆ ಭಕ್ತರು ಕಾಸು ಮೀಸಲು ಹರಕೆ ಸಲ್ಲಿಸುತ್ತಾರೆ. ಫೆ.1 ರಂದು ದೇವಿಯನ್ನು ನಾಯನಹಟ್ಟಿಯಿಂದ ದೇವರಹಳ್ಳಿಗೆ ಕಳುಹಿಸಿಕೊಡಲಾಗುತ್ತದೆ.

ತೆಲುಗು ಭಾಷೆಯಲ್ಲಿ ದಡ್ಲು ಎಂದರೆ ಹಟ್ಟಿ ಎಂಬ ಅರ್ಥವಿದೆ. ಹಟ್ಟಿಯ ಗ್ರಾಮದೇವತೆಯನ್ನು ದಡ್ಲು ಮಾರಮ್ಮ ಎಂದು ಕರೆಯುವ ಪ್ರತೀತಿ ಇದೆ. ದಡ್ಲು ಮಾರಮ್ಮ ಮೂಲತಃ ನಾಯಕನಹಟ್ಟಿ ಗ್ರಾಮದ ಗ್ರಾಮ ದೇವತೆ. ಸುಮಾರು 400ರಿಂದ 500ವರ್ಷಗಳ ಹಿಂದೆ ಲೋಕಸಂಚಾರದ ನಿಮಿತ್ತ ಗುರು ತಿಪ್ಪೇರುದ್ರಸ್ವಾಮಿ ಅವರು ನಾಯಕನಹಟ್ಟಿಗೆ ಬರುತ್ತಾರೆ.

ಈ ವೇಳೆ ಗ್ರಾಮದ ಮೂರು ಜನ ಅಕ್ಕ ತಂಗಿ ದೇವತೆಗಳನ್ನು ಗೌರಸಮುದ್ರ, ಎನ್. ದೇವರಹಳ್ಳಿ ಮತ್ತು ವಡ್ಡನಹಳ್ಳಿ ಗ್ರಾಮಗಳಿಗೆ ತೆರಳಲು ಪ್ರೇರೇಪಿಸುತ್ತಾರೆ. ಹೀಗೆ ಗುರು ತಿಪ್ಪೇರುದ್ರಸ್ವಾಮಿ ಅವರು ತಿಳಿಸಿದ ಗ್ರಾಮಗಳಿಗೆ ಮೂರೂ ಹೆಣ್ಣು ದೈವಗಳು ತೆರಳಿ ಗೌರಸಮುದ್ರ ಮಾರಮ್ಮ, ದೇವರಹಳ್ಳಿ ದಡ್ಲು ಮಾರಮ್ಮ, ವಡ್ಡನಹಳ್ಳಿ ಮಾರಮ್ಮ ಎಂದು ಪ್ರಸಿದ್ಧರಾಗುತ್ತಾರೆ ಎಂಬ ಪ್ರತೀತಿ ಇದೆ. ದಡ್ಲು ಮಾರಮ್ಮ ಹಂಪಿಯ ಆನಗೊಂದಿ ಸಂಸ್ಥಾನದ ಮಹಾರಾಜರ ಆರಾಧ್ಯ ದೇವಿಯಾಗಿದ್ದಳು.

ಈ ಜಾತ್ರೆಯು ಗ್ರಾಮದ ಗೌಡರು, ಗೊಂಚಿಗಾರರು, ದೊರೆಗಳು, ಮಠಸ್ಥರು, ದಳವಾಯಿಗಳು, ದೂಪದ ಸೇವೆಯವರು, ತಳವಾರರು, ಗುರಿಕಾರರು, ಹಟ್ಟಿದಾಸಯ್ಯರು, ಮಡಿವಾಳರು, ಜೋಗಿಹಟ್ಟಿ ಗೊಲ್ಲ ಸಮುದಾಯದ ಕಾಸು ಮೀಸಲುಗಾರರು, ಈಡಿಗ ಸಮುದಾಯದ ಘಟ ಸ್ಥಾಪನೆಯವರು, ಪರಿಶಿಷ್ಟ ಜಾತಿಯ ಚರಗ ಸೇವೆಯವರು, ಧಗಮ ಪೂಜಾರಿ, ಮಾತಂಗಿ ದೈವಸ್ಥರು, ಚೌಡಿಕೆಯವರು ಪೂರ್ವಕಾಲದಿಂದಲೂ ಜಾತ್ರೆಯ ಸೇವೆಯನ್ನು ನಡೆಸಿಕೊಂಡು ಬಂದಿರುತ್ತಾರೆ.

ಗ್ರಾಮದ ಎಲ್ಲ ಸಮುದಾಯದ ಜನರು ಭಾಗವಹಿಸಿ ತಮಗೆ ವಹಿಸಿದ ಸೇವೆಯನ್ನು ನಿರ್ವಹಿಸಿ ದೇವಿಗೆ ಭಕ್ತಿಯಿಂದ ನಮಿಸುತ್ತಾರೆ. ಹಾಗಾಗಿ ಈ ಜಾತ್ರೆಯು ಕೂಡುಕಟ್ಟು ಸಂಸ್ಕೃತಿ ಹಾಗೂ ಸಾಮರಸ್ಯಕ್ಕೆ ಸಾಕ್ಷಿಯಾಗಿದೆ.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

TAGGED:celebrationDevarahalliDevifive yearsJatreNayakhattiಐದು ವರ್ಷಜಾತ್ರೆದೇವರಹಳ್ಳಿದೇವಿನಾಯಕಹಟ್ಟಿಸಂಭ್ರಮ
Share This Article
Facebook Email Print
Previous Article ಮಾಡದಕೆರೆ-ಎಚ್.ಡಿ.ಪುರ ಭಾಗದಲ್ಲಿ ಹದ ಮಳೆ | ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ ವರದಿ ನೋಡಿ
Next Article 20 ರೂಪಾಯಿ ವೈದ್ಯ ಪರ್ವಪ್ಪ ನೆನಪು ಮಾತ್ರ | ಬಡವರ ಪಾಲಿನ ಆಶಾಕಿರಣ
Leave a Comment

Leave a Reply Cancel reply

Your email address will not be published. Required fields are marked *

ಕಾಂಗ್ರೆಸ್ ಅವಧಿಯಲ್ಲಿ ಶೇ.60 ರಷ್ಟು ಕಮಿಷನ್ ನಡೆಯುತ್ತಿದೆ | AAP ಜಿಲ್ಲಾಧ್ಯಕ್ಷ ಜಗದೀಶ್
ಮುಖ್ಯ ಸುದ್ದಿ
ಗಾಂಧಿವೃತ್ತ, ಸಂತೆಹೊಂಡದ ಬಳಿಯ ವಾಣಿಜ್ಯ ಸಂಕೀರ್ಣಗಳ ಕಾಮಗಾರಿ ವೀಕ್ಷಿಸಿದ ಸಚಿವರು
ಮುಖ್ಯ ಸುದ್ದಿ
ಸಚಿವ ಸ್ಥಾನದಿಂದ ಜಮೀರ್ ಅಹಮದ್‍ ಖಾನ್ ವಜಾಗೊಳಿಸಿ | ಜೆಡಿಎಸ್ ಪ್ರತಿಭಟನೆ
ಮುಖ್ಯ ಸುದ್ದಿ
ಡಾ.ಶ್ರೀ.ಶಿವಮೂರ್ತಿ ಮುರುಘಾ ಶರಣರು
ಮುರುಘಾ ಶ್ರೀಗಳ ಪ್ರಕರಣ ಅಂತಿಮ ಹಂತಕ್ಕೆ | ಖುದ್ದು ಹೇಳಿಕೆ ದಾಖಲಿಸಲು ದಿನಾಂಕ ನಿಗಧಿ | ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ ಶರಣರು
ಮುಖ್ಯ ಸುದ್ದಿ
© Chitradurga News. Ruby Design Company. All Rights Reserved.

Chitradurga News App

Install
Welcome Back!

Sign in to your account

Username or Email Address
Password

Lost your password?

Not a member? Sign Up