CHITRADURGA NEWS | 01 DECEMBER 2024
ಚಿತ್ರದುರ್ಗ: ಪವಾಡ ಪುರುಷ, ಅವಧೂತ ಪರಂಪರೆಯ ಕಾಯಕ ಯೋಗಿ ಶ್ರೀ ಕೊಳಾಳು ಕೆಂಚಾವಧೂತರ ಕಾರ್ತಿಕ ಮಹೋತ್ಸವ ಕಾರ್ಯಕ್ರಮ ಇಂದು ರಾತ್ರಿ 8 ಗಂಟೆಗೆ ನಡೆಯಲಿದೆ.
ಹೊಳಲ್ಕೆರೆ ತಾಲೂಕು ಕೊಳಾಳು(Kolalu) ಶ್ರೀ ಕೆಂಚಾವಧೂತರ ಮಠದಲ್ಲಿ ಡಿಸೆಂಬರ್ 1 ಭಾನುವಾರ ರಾತ್ರಿ 8 (ಇಂದು ರಾತ್ರಿ) ಗಂಟೆಗೆ ಕಾರ್ತಿಕ ಮಹೋತ್ಸವ ಪ್ರಾರಂಭವಾಗಲಿದೆ.

ಇದನ್ನೂ ಓದಿ: ಸಿಟಿ ಇನ್ಸ್ಟಿಟ್ಯೂಟ್(City club) ಚುನಾವಣೆ | ನಿರ್ದೇಶಕರ ಫಲಿತಾಂಶ ಪ್ರಕಟ
ಸಂಪ್ರದಾಯದಂತೆ ನಂದಾದೀಪ ನಂದಿ ಧ್ವಜ ಸಮ್ಮೇಳದೊಂದಿಗೆ ಒಳಮಠದಿಂದ ಹೊರಮಠಕ್ಕೆ ವಿಜೃಂಭಣೆಯಿಂದ ತೆರಳುವುದು. ಅಖಂಡ ಜ್ಯೋತಿ ಬೆಳಗಿಸಿದ ನಂತರ ದಾಸೋಹ, ಅಖಂಡ ಭಜನೆ ನಡೆಯಲಿದೆ.
ಸಮಸ್ತ ಭಕ್ತಾದಿಗಳು ಕಾರ್ತಿಕ ಮಹೋತ್ಸವ ಹಾಗೂ ದೀಪೋತ್ಸವದಲ್ಲಿ ಭಾಗವಹಿಸಲು ಶ್ರೀ ಕೆಂಚಾವಧೂತ ಗದ್ದುಗೆ ವಿಶ್ವಸ್ಥ ಸೇವಾ ಟ್ರಸ್ಟ್ ಮನವಿ ಮಾಡಿದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
