By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Reading: ಅನ್ನದಾತರ ಶ್ರಮದಾನ | ಸ್ವಚ್ಛವಾಯಿತು ಕಾಲುವೆ ನಳನಳಿಸಿದ ಜಲಧಾರೆ
Share
Font ResizerAa
Chitradurga News-Kannada NewsChitradurga News-Kannada News
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2022 Foxiz News Network. Ruby Design Company. All Rights Reserved.

Home » ಅನ್ನದಾತರ ಶ್ರಮದಾನ | ಸ್ವಚ್ಛವಾಯಿತು ಕಾಲುವೆ ನಳನಳಿಸಿದ ಜಲಧಾರೆ

ಮುಖ್ಯ ಸುದ್ದಿ

ಅನ್ನದಾತರ ಶ್ರಮದಾನ | ಸ್ವಚ್ಛವಾಯಿತು ಕಾಲುವೆ ನಳನಳಿಸಿದ ಜಲಧಾರೆ

News Desk Chitradurga News
Last updated: 19 March 2024 10:41
News Desk Chitradurga News
1 year ago
Share
SHARE
https://chat.whatsapp.com/Jhg5KALiCFpDwME3sTUl7x

CHITRADURGA NEWS | 19 MARCH 2024
ಚಿತ್ರದುರ್ಗ: ಅನ್ನದಾತರು ಮನಸ್ಸು ಮಾಡಿದರೆ ಅಸಾಧ್ಯವನ್ನು ಸಾಧ್ಯವಾಗಿಸುತ್ತಾರೆ ಎಂಬುದಕ್ಕೆ ಬಯಲು ಸೀಮೆ ರೈತರ ಕಾರ್ಯ ಸ್ಪಷ್ಟ ನಿದರ್ಶನವಾಗಿದೆ. ತ್ಯಾಜ್ಯ ತುಂಬಿದ್ದ ಕಾಲುವೆಯನ್ನು ಸ್ವಚ್ಛಗೊಳಿಸಿ ಸರಾಗವಾಗಿ ನೀರು ಹರಿಯುವಂತೆ ಮಾಡಿದ್ದಾರೆ ಚಳ್ಳಕೆರೆ ತಾಲ್ಲೂಕಿನ ಪರಶುರಾಂಪುರ ರೈತರು.

ಸತತ 11 ದಿನಗಳ ಶ್ರಮದಾನದಿಂದ ನಾರಾಯಣಪುರ ಬಲದಂಡೆ ಕಾಲುವೆಗೆ ವಾಣಿ ವಿಲಾಸ ಸಾಗರದ ನೀರು ಹರಿದಿದೆ. ಬರದ ಸಂಕಷ್ಟದಲ್ಲಿ ಕೃಷಿಕ ಸಮುದಾಯದಲ್ಲಿ ಮಂದಹಾಸ ಮೂಡಿದೆ. ಕಾಲುವೆಯಲ್ಲಿ ತುಂಬಿಕೊಂಡಿದ್ದ ಹೂಳನ್ನು ಸುತ್ತಲಿನ ಗ್ರಾಮಗಳ ರೈತರು, ಕೂಲಿ ಕಾರ್ಮಿಕರು ಸೇರಿ ಸ್ವಚ್ಛಗೊಳಿಸಿದ್ದಾರೆ.

ಹಿರಿಯೂರು ತಾಲ್ಲೂಕು ಅಚ್ಚುಕಟ್ಟು ಪ್ರದೇಶಕ್ಕೆ ವಾಣಿವಿಲಾಸ ಸಾಗರದ ನೀರನ್ನು ಹರಿಸಿರುವುದರಿಂದ ಹಿರಿಯೂರು ತಾಲ್ಲೂಕಿನ ಶಿಡ್ಲಯ್ಯನಕೋಟೆ ಬಳಿಯ ಬ್ಯಾರೇಜ್ ತುಂಬಿದೆ. ಅಲ್ಲಿಂದ ನಾರಾಯಣಪುರ ಬಲದಂಡೆ ಕಾಲುವೆ ಆರಂಭವಾಗುತ್ತದೆ. ಆದರೆ ಕಾಲುವೆಯಲ್ಲಿ ಹೂಳು, ತ್ಯಾಜ್ಯ ತುಂಬಿದ್ದ ಕಾರಣ ನೀರು ಮುಂದಕ್ಕೆ ಹರಿಯುವುದು ಕಷ್ಟವಾಗಿತ್ತು.

ಕ್ಲಿಕ್ ಮಾಡಿ ಓದಿ: https://chitradurganews.com/he-move-of-the-bjp-congress-leaders-raised-curiosity/

ಈ ವೇಳೆ ರೈತರು ಹೂಳೆತ್ತುವಂತೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಆದರೆ, ಅನುದಾನ ಇಲ್ಲ ಎಂದು ತಿಳಿಸುವ ಮೂಲಕ ಅಧಿಕಾರಿಗಳು ಕೈಚೆಲ್ಲಿದ್ದರು. ನೀರು ಹರಿದರೆ ಹೋಬಳಿ ವ್ಯಾಪ್ತಿಯ ತಿಮ್ಮಣ್ಣನಾಯಕನ ಕೋಟೆ, ಗೋಸಿಕೆರೆ, ಚೌಳೂರು ಮತ್ತು ಪರಶುರಾಂಪುರದ ಹಳೆಕೆರೆ ಹಾಗೂ ಹೊಸಕೆರೆಗೆ ನೀರು ಬರಲಿದೆ. ಇಲ್ಲವಾದರೆ ಸುಮ್ಮನೆ ಸಮಸ್ಯೆ ಆಗುತ್ತದೆ ಎಂಬುದು ರೈತರಿಗೆ ಸ್ಪಷ್ಟವಾಗಿತ್ತು.

ಕ್ಲಿಕ್ ಮಾಡಿ ಓದಿ: https://chitradurganews.com/chitradurga-bjp-ticket-for-narayanaswamy

ಕೂಡಲೇ ತಿಮ್ಮಣ್ಣನಾಯಕನ ಕೋಟೆ, ದೊಡ್ಡಬೀರನಹಳ್ಳಿ, ಓಬಳಾಪುರ, ಗೋಸಿಕೆರೆ, ಹೊನ್ನಯ್ಯನರೊಪ್ಪ ಸೇರಿದಂತೆ ಸುತ್ತಲಿನ ರೈತರು ಸ್ವಯಂ ಪ್ರೇರಿತವಾಗಿ ಕಾಲುವೆಗೆ ಇಳಿದು ಸ್ವಚ್ಛತಾ ಕಾರ್ಯಕ್ಕೆ ಮುನ್ನಡಿ ಬರೆದರು.

ದೊಡ್ಡಬೀರನಹಳ್ಳಿಯ ರೈತರು ಜೆಸಿಬಿ ಯಂತ್ರ, ತಿಮ್ಮಣ್ಣನಾಯಕನ ಕೋಟೆಯ ರೈತರು ಹುಲ್ಲು ಕಟಾವು ಮಾಡುವ ಯಂತ್ರ, ಓಬಳಾಪುರ ಮತ್ತು ಹೊನ್ನಯ್ಯನರೊಪ್ಪದ ರೈತರು ಇತರ ಸಾಧನಗಳನ್ನು ನೀಡಿ ನಾಲೆ ಸ್ವಚ್ಛತೆಗೆ ಸಹಕರಿಸಿದ್ದರು. ಸಂಘಟಿತ ಕಾರ್ಯದ ಪ್ರತಿಫಲವಾಗಿ ಕಾಲುವೆಗೆ ನೀರು ಹರಿದು ತಿಮ್ಮಣ್ಣನಾಯಕನ ಕೋಟೆ ಕೆರೆಗೆ ನೀರು ಬಂದಿದೆ.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

TAGGED:canalCleanlinessFarmersLaborwatercourseಕಾಲುವೆಜಲಧಾರೆರೈತರುಶ್ರಮದಾನಸ್ವಚ್ಛ
Share This Article
Facebook Email Print
Previous Article ಅಬಕಾರಿ ಅಕ್ರಮ ತಡೆಗೆ ಪ್ಲೈಯಿಂಗ್‌ ಸ್ಕ್ವಾಡ್‌ | ಗಡಿ ಭಾಗದಲ್ಲಿ ಠಾಣೆ ಓಪನ್
Next Article ಮನಸ್ತಾಪ ಬಿಟ್ಟು ಒಂದಾಗಿ ಹೋಗೋಣ | ಒಗ್ಗಟ್ಟಿನ ಮಂತ್ರ ಜಪಿಸಿದ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್‌
Leave a Comment

Leave a Reply Cancel reply

Your email address will not be published. Required fields are marked *

Gavayi smaranothsava
ಶಾರದಮ್ಮ ರುದ್ರಪ್ಪ ಕಲ್ಯಾಣ ಮಂಟಪದಲ್ಲಿ ಗಾನಯೋಗಿಗಳ ಪುಣ್ಯ ಸ್ಮರಣೆ | ಸಾಧಕರಿಗೆ ಸನ್ಮಾನ
ಮುಖ್ಯ ಸುದ್ದಿ
ಮುರುಘಾಮಠದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಮೊದಲನೇ ಕಾರ್ಯಕಾರಿ ಸಭೆ | ಮಠಾಧೀಶರು ಸೇರಿದಂತೆ ಗಣ್ಯರು ಭಾಗೀ
ಮುಖ್ಯ ಸುದ್ದಿ
ಉಸಿರಾಟದ ಕಾಯಿಲೆಗಳಿಗೆ ಈ ಎಲೆಯನ್ನು ಬಳಸಿ
Life Style
ಹೃದಯಾಘಾತದ ನಂತರ ಈ ತಪ್ಪುಗಳನ್ನು ಮಾಡಬೇಡಿ
Life Style
© Chitradurga News. Ruby Design Company. All Rights Reserved.

Chitradurga News App

Install
Welcome Back!

Sign in to your account

Username or Email Address
Password

Lost your password?

Not a member? Sign Up