
ಚಿತ್ರದುರ್ಗ ನ್ಯೂಸ್.ಕಾಂ: ಬರದಿಂದ ಬೆಂದು ಹೋಗಿದ್ದ ಕೋಟೆನಾಡು ಚಿತ್ರದುರ್ಗ ಜಿಲ್ಲೆಗೆ ಭರ್ಜರಿ ಮಳೆಯಾಗಿದೆ.
ಜಿಲ್ಲೆಯ ಹೊಳಲ್ಕೆರೆ ತಾಲೂಕಿನಲ್ಲಿ ಅತೀ ಹೆಚ್ಚು ಮಳೆಯಾಗಿದ್ದು, ಹನುಮನಕಟ್ಟೆಯ ಚೆಕ್ ಡ್ಯಾಂ ಭರ್ತಿಯಾಗಿ ಹರಿಯುತ್ತಿದೆ. ರೈತರ ಜಮೀನುಗಳಲ್ಲಿರುವ ಹಲವು ಕೃಷಿ ಹೊಂಡಗಳಿಗೆ ನೀರು ಬಂದಿದೆ.

ಹೊಳಲ್ಕೆರೆ ವ್ಯಾಪ್ತಿಯಲ್ಲಿ 86.8 ಮಿ.ಮೀ ಮಳೆಯಾಗಿದೆ. ಸಿರಿಗೆರೆಯಲ್ಲಿ 78 ಮಿ.ಮೀ ಮಳೆಯಾಗಿದೆ.
ಇದನ್ನೂ ಓದಿ: ಕೋಟೆನಾಡಿಗೆ ಕಾಲಿಟ್ಟ ಮಳೆರಾಯ | ಒಂದೇ ರಾತ್ರಿಗೆ ಇಳೆಯೆಲ್ಲಾ ತಂಪು

ಉಳಿದಂತೆ ಚಳ್ಳಕೆರೆ 4, ನಾಯಕನಹಟ್ಟಿ 16, ಡಿ.ಮರಿಕುಂಟೆ 2, ಚಿತ್ರದುರ್ಗ 21, ತುರವನೂರು 2, ಹಿರೇಗುಂಟನೂರು 3, ಭರಮಸಾಗರ 8, ಸಿರಿಗೆರೆ 78, ಐನಳ್ಳಿ 31, ಹೊಳಲ್ಕೆರೆ 86, ರಾಮಗಿರಿ 49, ಚಿಕ್ಕಜಾಜೂರು 18, ಬಿ.ದುರ್ಗ 22, ಎಚ್ .ಡಿ.ಪುರ 36, ತಾಳ್ಯ 8, ಮೊಳಕಾಲ್ಮುರು 39, ರಾಯಾಪುರ 23, ಬಿಜಿ ಕೆರೆ 3, ರಾಂಪುರ 27, ದೇವಸಮುದ್ರ 51, ಹೊಸದುರ್ಗ 24, ಬಾಗೂರು 7, ಮತ್ತೋಡು 13, ಶ್ರೀರಾಂಪುರ 50, ಮಾಡದಕೆರೆ 26 ಮೀ.ಮಿ ಮಳೆಯಾಗಿದೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
